Ticker

6/recent/ticker-posts

ಅರ್ಜುನನ ಧ್ವಜದಲ್ಲಿ ಹನುಮಂತನು ಇರಲು ಕಾರಣವೇನು? | Why Hanuman was on Arjuna's Chariot Flag

ಅರ್ಜುನನ ಧ್ವಜದಲ್ಲಿ ಹನುಮಂತನು ಇರಲು ಕಾರಣವೇನು? | Why Hanuman was on Arjuna's Chariot Flag

ಅರ್ಜುನ ಏಕಾಂಗಿಯಾಗಿ ತೀರ್ಥಯಾತ್ರೆ ಮಾಡುತ್ತಿದ್ದ ಕ್ಷಣ. ಅವನಿಗೊಂದು ಯೋಚನೆ ಬಂತು.

'ಶ್ರೇಷ್ಠ ಬಿಲ್ಲುಗಾರನಾದ ಶ್ರೀ ರಾಮ ಥಾಣೆ ತನ್ನ ಬಿಲ್ಲಿನಿಂದ ಸಾಗರಕ್ಕೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸದೆ, ವಾನರ ಸೇನೆಯ ಸಹಾಯವನ್ನು ಪಡೆದದ್ದು ಏಕೆ? ' ಎಂಬ ಪ್ರಶ್ನೆ ಮನದಲ್ಲಿ ಮೂಡಿತು. 

ಅವನು ಹೀಗೆ ಯೋಚಿಸುತ್ತಿರುವಾಗ ಒಂದು ಕಪಿ ಅವನ ಮುಂದೆ ಹಾರಿತು. 

'ಬಾಣಗಳಿಂದ ಕಟ್ಟಿದ ಸೇತುವೆ ಒಂದು ಕಪಿಯ ಭಾರವನ್ನು ಸಹ ತಾಳಲಾರದು. ಹೀಗಿರುವಾಗ ಇಡೀ ವಾನರಸೇನೆ ಅದರ ಮೇಲೆ ಹೇಗೆ ಸಂಚರಿಸುವುದು?’’ ಎಂದು ಆ ಕಪಿ ಅರ್ಜುನನನ್ನು ಕೇಳಿತು. 

ಆಗ ಅರ್ಜುನ,  "ಸಾಧ್ಯ! ಶ್ರೇಷ್ಠ ಬಿಲ್ಲುಗಾರರಿಗೆ ಇದು ಸಾಧ್ಯ. ನಾನು ಅಂದುಕೊಂಡರೆ ದೊಡ್ಡ ಬಲವನ್ನು ತಡೆದುಕೊಳ್ಳುವಷ್ಟು ದೃಢವಾದ ಬಾಣದ ಸೇತುವೆಯನ್ನು ನಿರ್ಮಿಸಬಲ್ಲೆ,'' ಎಂದು ಹೆಮ್ಮೆಯಿಂದ ಹೇಳಿದನು. 

"ಸರಿ ಹಾಗಾದರೆ. ಅಲ್ಲಿ ನೋಡು, ಒಂದು ನದಿ ಹರಿಯುತ್ತಿದೆ. ಅದರ ಮೇಲೆ ನೀನು ಬಾಣದ ಸೇತುವೆಯನ್ನು ನಿರ್ಮಿಸು. ಆ ಸೇತುವೆ ನನ್ನದೊಂದು ತೂಕವನ್ನು ತಡೆದುಕೊಳ್ಳುತ್ತದೆಯೇ ಎಂದು ನೋಡೋಣ" ಎಂದು ಕೋತಿ ಹೇಳಿತು.

`ಈಗಲೇ ಸೇತುವೆ ನಿರ್ಮಿಸುತ್ತೇನೆ. ನಿನ್ನಂತಹ ಸಾವಿರಾರು ಮಂಗಗಳು ಬಂದರೂ ಆ ಸೇತುವೆಗೆ ಧಕ್ಕೆಯಾಗುವುದಿಲ್ಲ.' ಎಂದನು ಅರ್ಜುನ. ಒಂದು ವೇಳೆ ನಿನ್ನ ಭಾರವನ್ನು ತಾಳದೆ ಸೇತುವೆ ಒಡೆದರೆ ನಾನು ಅಗ್ನಿ ಪ್ರವೇಶ ಮಾಡುತ್ತೇನೆ ಎಂದು ಕಪಿಗೆ ಸವಾಲೆಸದನು. 

ಆ ವಾನರ ರಾಮದ್ಯಾನದಲ್ಲಿ ಮಗ್ನನಾದ.

ಸ್ವಲ್ಪ ಸಮಯದಲ್ಲೇ ನದಿಗೆ ಅಡ್ಡಲಾಗಿ ಸೇತುವೆ ರಚನೆಯಾಯಿತು. ಅರ್ಜುನನು ವಾನರವನ್ನು ಎಚ್ಚರಿಸಿದ. ಎದ್ದ ಕೋತಿ ಓಡಿ ಬಂದು ಸೇತುವೆಯ ಮೇಲೆ ಒಂದು ಕಾಲನ್ನು ಇಟ್ಟಿತು. ಅಷ್ಟೆ, ಅರ್ಜುನ ಕಟ್ಟಿದ ಸೇತುವೆ ಕುಸಿದು ಬಿತ್ತು.

ಅರ್ಜುನ ದಿಗ್ಭ್ರಮೆಗೊಂಡ. ಅವನು ಮೊದಲೇ ಹೇಳಿದಂತೆ ಅಗ್ನಿ ಪ್ರವೇಶ ಮಾಡಲು ಸಿದ್ಧನಾದನು. ಕೋತಿ ಎಷ್ಟೇ ತಡೆಯಲು ಯತ್ನಿಸಿದರೂ ಕೇಳಲಿಲ್ಲ. 

ಆಗ ಅಲ್ಲಿಗೆ ದಾರಿಯಲ್ಲಿ ಹೋಗುತ್ತಿದ್ದ ಒಬ್ಬ ವ್ಯಕ್ತಿ ಬಂದು ಏನಾಯಿತು ಎಂದು ಕೇಳಿದನು. 

ನಡೆದದ್ದನ್ನು ಕೇಳಿ ತಿಳಿದ ಆ ವ್ಯಕ್ತಿ 'ಸಾಕ್ಷಿಯಿಲ್ಲದೆ ಹಾಕಿದ ಸವಾಲು ಸಲ್ಲದು. ಈಗ ನಾನೇ ಸಾಕ್ಷಿ. ‘ಮತ್ತೆ ಸೇತುವೆ ನಿರ್ಮಿಸಿ ಪರೀಕ್ಷಿಸೋಣ’ ಎಂದರು.

ಈಗ ಅರ್ಜುನನು ಕೃಷ್ಣ ಪರಮಾತ್ಮನನ್ನು ಮನಃಪೂರ್ವಕವಾಗಿ ಬೇಡಿಕೊಂಡನು ಮತ್ತು ಬಾಣವನ್ನು ಮುಟ್ಟಿದನು. ಮತ್ತೆ ಸೇತುವೆ ರೂಪುಗೊಂಡಿತು. 

ಈಗ ಆ ಕಪಿ ಸೇತುವೆಯ ಮೇಲೆ ಒಂದು ಕಾಲು ಇಟ್ಟನು, ಹತ್ತಿದನು, ನಡೆದನು, ಓಡಿದನು, ಜಿಗಿದನು... ಏನೂ ಆಗಲಿಲ್ಲ; ಸೇತುವೆ ಗಟ್ಟಿಯಾಗಿತ್ತು.

ಕಪಿಗೆ ಆಶ್ಚರ್ಯವಾಯಿತು. ಆ ವ್ಯಕ್ತಿಯ ಬಳಿಗೆ ಬಂದು ``ನೀವು ಯಾರು?'' ಎಂದು ಕೇಳಿತು.

ಥಟ್ಟನೆ ಆ ವ್ಯಕ್ತಿ  ಮಾಯವಾಗಿ, ಶ್ರೀಕೃಷ್ಣನು ಪ್ರತ್ಯಕ್ಷನಾದನು. ಕಪಿ ಸಹ ತನ್ನ ವಾನರ ರೂಪವನ್ನು ತ್ಯಜಿಸಿ ತನ್ನ ನಿಜ ರೂಪವಾದ ಹನುಮಂತನಾಗಿ ಬಂದು ಕೃಷ್ಣನನ್ನು ಆರಾಧಿಸಿದನು. 

ಅರ್ಜುನ ದಿಗ್ಭ್ರಮೆಗೊಂಡು, ಇಬ್ಬರಿಗೂ ನಮಸ್ಕರಿಸಿದನು.

ಆಗ ಶ್ರೀ ಕೃಷ್ಣನು, "ನೀವಿಬ್ಬರೂ ಸೋತಿಲ್ಲ. ಮೊದಲ ಬಾರಿ ಸೇತುವೆ ನಿರ್ಮಿಸುವಾಗ ಅರ್ಜುನನು ತನ್ನ ಸ್ವಂತ ಶಕ್ತಿಯ ಬಗ್ಗೆ ಸ್ವಲ್ಪಮಟ್ಟಿಗೆ ಅಹಂಕಾರ ಹೊಂದಿದ್ದನು. ಎರಡನೇ ಬಾರಿ ಅವನು ತನ್ನ ಗರ್ವವನ್ನು ತೆಗೆದು ನನಗೆ ಶರಣಾದನು. ಹಾಗಾಗಿ ಅವನು ಕಟ್ಟಿದ ಸೇತುವೆ ದೃಢವಾಗಿತ್ತು. ಅಹಂಕಾರ ಮೂಡಿದಾಗ ಸದ್ಗುಣಗಳು ನಮ್ಮಿಂದ ದೂರವಾಗುತ್ತವೆ. ನಮ್ಮ ಕರ್ತವ್ಯ ಮತ್ತು ಮಹತ್ವಾಕಾಂಕ್ಷೆ ಮರೆತು ಹೋಗುತ್ತದೆ. ಆದ್ದರಿಂದ ಅಹಂಕಾರ ತೊಲಗಬೇಕು'' ಎಂದು ಕೃಷ್ಣ ಹೇಳಿದನು.

ಹಾಗೆಯೇ ಹನುಮಂತನಿಗೆ, ``ಆಂಜನೇಯ! ಮುಂಬರುವ ಯುದ್ಧದ ಸಮಯದಲ್ಲಿ, ನೀನು ಅರ್ಜುನನ ಧ್ವಜದಲ್ಲಿದ್ದು ಅರ್ಜುನನನ್ನು ರಕ್ಷಿಸಬೇಕು. ಆತನಿಗೆ ನಿನ್ನ ರಕ್ಷೆ ಬೇಕು.’’ ಎಂದು ಹೇಳಿದನು. 

ಹನುಮಂತನು ಹಾಗೆಯೇ ಮಾಡಲು ಒಪ್ಪಿದನು. 

ಅರ್ಜುನನ ಧ್ವಜದಲ್ಲಿ ಹನುಮಂತನು ಹೇಗೆ ಕಾಣಿಸಿಕೊಂಡನು ಎಂಬುದನ್ನು ವಿವರಿಸುವ ಈ ಕಥೆಯು ಅಹಂಕಾರವು ಒಳ್ಳೆಯದಲ್ಲ ಎಂದು ನಮಗೆ ಕಲಿಸುತ್ತದೆ ಅಲ್ಲವೇ?


Post a Comment

0 Comments