Ticker

6/recent/ticker-posts

ಹಣ್ಣು ಮಾರುವವನ ಹಾಡು - ಕಯ್ಯಾರ ಕಿಞ್ಞಣ್ಣ ರೈ

ಕಳೆದ ಭಾನುವಾರ ಇಹ ಲೋಕವನ್ನು ತ್ಯಜಿಸಿದ ಕನ್ನಡದ ಖ್ಯಾತ ಕವಿ ಕಯ್ಯಾರ ಕಿಞ್ಞಣ್ಣ ರೈ ಅವರ 
ಹಣ್ಣು ಮಾರುವವನ ಹಾಡು ಎಂಬ ಪದ್ಯವನ್ನು ಇಲ್ಲಿ ಮೆಲುಕುಹಾಕುತ್ತಿದ್ದೆವೆ. 
 
ನಂಜನಗೂಡಿನ ರಸಬಾಳೆ                         
ತಂದಿಹೆ ಕೊಡಗಿನ ಕಿತ್ತೀಳೆ
ಬೀದರ ಜಿಲ್ಲೆಯ ಸೀಬೆಯ ಹಣ್ಣು
ಬೆಂಗಳೂರಿನ ಸೇಬಿನ ಹಣ್ಣು

ಕೊಳ್ಳಿರಿ ಹಿಗ್ಗನು ಹರಿಸುವವು
ಕಲ್ಲುಸಕ್ಕರೆಯ ಮರೆಸುವವು

ಕೊಳ್ಳಿರಿ ಮಧುಗಿರಿ ದಾಳಿಂಬೆ
ಬೆಳವಲ ಬಯಲಿನ ಸಿಹಿಲಿಂಬೆ
ಬೆಳಗಾವಿಯ ಸವಿ ಸಪೋಟ
ದೇವನಹಳ್ಳಿಯ ಚಕ್ಕೋತ

ನಾಲಿಗೆ ಬರವನು ಕಳೆಯುವವು
ದೇಹದ ಬಲವನು ಬೆಳೆಸುವವು

ಗಂಜಾಮ್ ಅಂಜೀರ್
ತುಮಕೂರ್ ಹಲಸು
ಧಾರವಾಡದ ಆಪೂಸು
ಮಲೆನಾಡಿನ ಅನಾನಸು

ಸವಿಯಿರಿ ಬಗೆಬಗೆ ಹಣ್ಣುಗಳ
ಕನ್ನಡ ನಾಡಿನ ಹಣ್ಣುಗಳ ||
 
                   - ಕಯ್ಯಾರ ಕಿಞ್ಞಣ್ಣ ರೈ 
 
 


 

Post a Comment

0 Comments