Ticker

6/recent/ticker-posts

ಪದ್ಮ ಭೂಷಣ - ಕಮಲ್ ಹಾಸನ್

ಈ ಸಾಲಿನ ಪದ್ಮ ಪ್ರಶಸ್ತಿ ವಿಜೇತರನ್ನು ಘೋಷಿಸಲಾಗಿದೆ. ಕಮಲ್ ಹಾಸನ್, ಲಿಯಾಂಡರ್ ಪಯಸ್, ಗೋಪಿಚಂದ್, ವೈರಮುತ್ತು, ಯುವರಾಜ್ ಸಿಂಗ್ ಸೇರಿದಂತೆ ಹಲವು ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ.

ನಟ ಕಮಲ್ ಹಾಸನ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಕಮಲ್ ಅವರಿಗೆ ಈ ಪ್ರಶಸ್ತಿ  ಬಹಳ ತಡವಾಗಿಯೇ ದೊರೆತಿದೆ. ಪ್ರಶಸ್ತಿ , ಪುರಸ್ಕಾರಗಳು ಕಮಲ್ ಅವರಿಗೆ ಹೊಸದೇನು ಅಲ್ಲ. ಆದರು ಸರಕಾರ ಸಾಧಕರನ್ನು ಸರಿಯಾದ ಸಮಯದಲ್ಲಿ ಗೌರವಿಸಬೇಕು. ಇಲ್ಲದಿದ್ದರೆ ಆ ಪುರಸ್ಕಾರಕ್ಕೆ ಅರ್ಥವಿಲ್ಲ. 

ತಮಗೆ ಪದ್ಮ ಭೂಷಣ ಪ್ರಶಸ್ತಿ ಸಂದಿರುವುದರ ಬಗ್ಗೆ ಕಮಲ್ ಹಾಸನ್ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಭಾರತೀಯನಾಗಿ ಹೆಮ್ಮೆ ಪಡುತ್ತೇನೆ. ಹಲವಾರು ಕ್ಷೇತ್ರಗಳಲ್ಲಿ, ಹಲವಾರು ಪ್ರತಿಭೆಗಳನ್ನು ಹೊಂದಿರುವ ನಮ್ಮ ದೇಶದಲ್ಲಿ, ಈ ಬಾರಿ ನನಗೆ ಪದ್ಮ ಭೂಷಣ ಪ್ರಶಸ್ತಿ ಸಂದಿರುವುದು ನನಗೆ ದೊರೆತ ದೊಡ್ಡ ಗೌರವ. ಸರ್ಕಾರಕ್ಕೆ ನನ್ನ ಧನ್ಯವಾದಗಳು. ಈ ಪ್ರಶಸ್ತಿಗೆ ನಾನು ನನ್ನನ್ನು ಅರ್ಹನನ್ನಾಗಿ ಮಾಡಿಕೊಳ್ಳಲು ಇನ್ನು ಮುಂದೆಯೂ ನಾನು ಪ್ರಯತ್ನಿಸಬೇಕು. ಭಾರತಕ್ಕೆ ಹಾಗು ಎಲ್ಲರ ಪ್ರೀತಿಗೆ ಧನ್ಯವಾದಗಳು. ಪ್ರಶಸ್ತಿ ಪಟ್ಟಿಯಲ್ಲಿರುವ ಎಲ್ಲ ಸಾಧಕರಿಗೂ ನನ್ನ ಅಭಿನಂದನೆಗಳು. ಅದರಲ್ಲೂ ನನ್ನ ಸ್ನೇಹಿತರಾದ ವೈರಮುತ್ತು ಅವರಿಗೆ ನನ್ನ ಅಭಿನಂದನೆಗಳು.

ಲೋಕನಾಯಕನಿಗೆ ಅಭಿನಂದನೆಗಳು.

Post a Comment

1 Comments

Comment is awaiting for approval