Ticker

6/recent/ticker-posts

ಪವಡಿಸು ಪರಮಾತ್ಮ ಶ್ರೀ ವೆಂಕಟೇಶ - ಶ್ರೀ ಶ್ರೀನಿವಾಸ ಕಲ್ಯಾಣ | ಎಸ್. ಪಿ. ಬಾಲಸುಬ್ರಮಣ್ಯಂ

ಪವಡಿಸು ಪರಮಾತ್ಮ ಶ್ರೀ ವೆಂಕಟೇಶ - ಶ್ರೀ ಶ್ರೀನಿವಾಸ ಕಲ್ಯಾಣ | ಎಸ್. ಪಿ. ಬಾಲಸುಬ್ರಮಣ್ಯಂ [Pavadisu Paramathma Sri Venkatesha Lyrics in Kannada | Sri Srinivasa Kalyana]: ಶ್ರೀ ಶ್ರೀನಿವಾಸ ಕಲ್ಯಾಣ [1974] ಕನ್ನಡ ಚಿತ್ರದ 'ಪವಡಿಸು ಪರಮಾತ್ಮ ಶ್ರೀ ವೆಂಕಟೇಶ'  ಗೀತೆಯನ್ನು ಹಾಡಿದವರು ಖ್ಯಾತ ಹಿನ್ನಲೆ ಗಾಯಕರಾದ ಎಸ್. ಪಿ. ಬಾಲಸುಬ್ರಮಣ್ಯಂ. ಸಂಗೀತ ಸಂಯೋಜಿಸಿದವರು 'ರಾಜನ್-ನಾಗೇಂದ್ರ' ಹಾಗು ಸಾಹಿತ್ಯ ಬರೆದವರು ಚಿ. ಉದಯಶಂಕರ್. 

ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರವನ್ನು ನಿರ್ದೇಶಕ ವಿಜಯ್ ಅವರು ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಡಾ. ರಾಜಕುಮಾರ್, ಸರೋಜಾ ದೇವಿ, ಮಂಜುಳಾ, ಶ್ರೀನಾಥ್, ವಜ್ರಮುನಿ, ಸಂಪತ್, ರಾಜಾಶಂಕರ್,  ಅಡ್ವಾಣಿ ಲಕ್ಷ್ಮಿ ದೇವಿ , ಬಿ. ಜಯ, ಶಿವ  ರಾಜಕುಮಾರ್, ರಾಘವೇಂದ್ರ  ರಾಜಕುಮಾರ್ ಮತ್ತಿತರು ನಟಿಸಿದ್ದಾರೆ.

ಗೀತೆ : ಪವಡಿಸು  ಪರಮಾತ್ಮ 

ಚಿತ್ರ : ಶ್ರೀ ಶ್ರೀನಿವಾಸ ಕಲ್ಯಾಣ  [1974]
ಸಂಗೀತ : 'ರಾಜನ್-ನಾಗೇಂದ್ರ
ಸಾಹಿತ್ಯ : ಚಿ. ಉದಯಶಂಕರ್
ಗಾಯಕ : ಎಸ್. ಪಿ. ಬಾಲಸುಬ್ರಮಣ್ಯಂ 
ತಾರಾಗಣ : ಡಾ. ರಾಜಕುಮಾರ್, ಸರೋಜಾ ದೇವಿ, ಮಂಜುಳಾ

ಪವಡಿಸು ಪರಮಾತ್ಮ ಶ್ರೀ ವೆಂಕಟೇಶ - ಶ್ರೀ ಶ್ರೀನಿವಾಸ ಕಲ್ಯಾಣ ಸಾಹಿತ್ಯ

ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ 
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ

ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ
ಅನಸೂಯೆ ಜೋಗುಳವ ಹಾಡಿ ನಲಿದ ರೀತಿ 
ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ
ಅನಸೂಯೆ ಜೋಗುಳವ ಹಾಡಿ ನಲಿದ ರೀತಿ 
ನಿನ್ನ ಮಹಿಮೆಯ ಪಾಡಿ ಪಾದ ಸೇವೆಯ ಮಾಡಿ 

ನಿನ್ನ ಮಹಿಮೆಯ ಪಾಡಿ ಪಾದ ಸೇವೆಯ ಮಾಡಿ 
ಧನ್ಯನಾಗುವೆನಿಂದು ಕರುಣಿಸೋ ದಯಮಾಡಿ 

ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ 
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ 

ಇರುಳು ಮುಗಿಯದೆ ಇರಲಿ  ಹಗಲು ಮೂಡದೇ ಇರಲಿ 
ಅನುಗಾಲ ಈ ಸೇವೆ ಸಾಗುತಲೇ ಇರಲಿ 
ಇರುಳು ಮುಗಿಯದೆ ಇರಲಿ  ಹಗಲು ಮೂಡದೇ ಇರಲಿ 
ಅನುಗಾಲ ಈ ಸೇವೆ ಸಾಗುತಲೇ ಇರಲಿ 
ಭಕ್ತಿ ಅರಿತವನಲ್ಲ ಮುಕ್ತಿಯು ಬೇಕಿಲ್ಲ 
ಭಕ್ತಿ ಅರಿತವನಲ್ಲ ಮುಕ್ತಿಯು ಬೇಕಿಲ್ಲ 
ನಿನ್ನ ಕಾಣದೆ ಜೀವ ಕ್ಷಣಕಾಲ ನಿಲ್ಲದಯ್ಯ 

ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ 
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ
ಶ್ರೀ ವೆಂಕಟೇಶ ಸಪ್ತಗಿರಿವಾಸ



Post a Comment

0 Comments